ವಿಷಯಕ್ಕೆ ಹೋಗಿ

ಪಕ್ಷವೊಂದರ ಲಾಲಸೆಗೆ ಗಡಿ-ಗಣಿ ಬಲಿ

ರಾಜಕೀಯ ಪಕ್ಷವೊಂದು ಮಾಡಿದ ಒಂದೇ ಒಂದು ಯಡವಟ್ಟು ಈ ರೀತಿ ರಾಜ್ಯದ ಬುಡಕ್ಕೇ ಕೊಡಲಿ ಏಟು ಬೀಳುವಂತೆ ಮಾಡುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ಬಳ್ಳಾರಿಯ ಗಣಿ ಧಣಿಗಳ ಹಣದ ಥೈಲಿಯನ್ನು ಪಕ್ಷದ ಬೆಳವಣೀಗೆಗೆ ಉಪಯೋಗಿಸಿಕೊಳ್ಳಲು ಹೊಂಚು ಹಾಕಿದ ಬಿಎಸ್ವೈ ಧಣಿಗಳನ್ನ್ನು ಇನ್ನಿಲ್ಲದಂತೆ ಎತ್ತಿ ಕೊಂಡಾಡಿದರು. ಈ ಪಕ್ಷದಲ್ಲಿದ್ದೂ ಪಕ್ಕದ ರಾಜ್ಯದ ಆ ಪಕ್ಷಕ್ಕೆ ನಿಷ್ಟರಾಗಿದ್ದ ಧಣಿಗಳು ಇಲ್ಲಿನ ಗಣಿ ಸಂಪತ್ತನ್ನು ಲೂಟಿ ಮಾಡಲು ಬಿಎಸ್ವೈ ಮಾತಿಗೆ ಹೂಂಗುಟ್ಟಿದ್ದೂ ಹೌದು.
ಆಡು ಕೊಬ್ಬಿತ್ತು, ತೋಳ ಹಸಿದಿತ್ತು ಎಂಬಂತೆ ಧಣಿ ಬಳಗ ಈ ಪಕ್ಷವನ್ನು ಎರಡು ಚುನಾವಣೆಗಳಲ್ಲಿ ಗೆಲ್ಲಿಸಲೂ ಕೂಡಾ ಸಫಲವಾದವು. ಕೇವಲ ಐದಾರು ವರ್ಷಗಳ ಹಿಂದೆ ಅಬ್ಬೇಪಾರಿಗಳಂತೆ ಇದ್ದ ಧಣಿಗಳು ಇಂದು ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾಗಿದಾರೆಂದರೆ ಅಲ್ಲಿ ಈ ನೆಲದ ಋಣವಿದೆ. ಆದರೆ ಆ ಋಣವನ್ನು ತೀರಿಸುವುದಂತಿರಲಿ, ಇಲ್ಲಿನ ರೈತರನ್ನೇ ನೆಲಕ್ಕೆ ಹಾಕಿ ತುಳಿಯಲು ಹೊರಟ ಇವರು ಮೊನ್ನೆ ಮೊನ್ನೆ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ ನಲವತ್ತೈದು ಕೋಟಿ ರೂಪಾಯಿಗಳ ವಜ್ರದ ಕಿರೀಟವನ್ನೇ ತೊಡಿಸಿ ಆಂಧ್ರ ಜನರಿಂದ ಜೈ ಅನ್ನಿಸಿಕೊಂಡಿರುವುದು ನಮ್ಮ ದುರಂತ! ಇನ್ನೊಬ್ಬ ಧಣಿ ಹೋಗಿ ಅದೇ ಆಂಧ್ರದ ಇನ್ನೊಂದು ದೇವಾಲಯ ಶ್ರೀ ಕಾಳಹಸ್ತಿಗೂ ಇರಲಿ ಅಂತ ಏಳು ಕೋಟಿ ರೂಪಾಯಿಗಳದ್ದೊಂದು ಕಿರೀಟ ಹಾಕಿ ಬಂದಿದ್ದಾರೆ. ಆ ಮೂಲಕ ಓಟು ನೀಡಿದ ಕನ್ನಡಿಗರಿಗೆ ಭ್ಹರ್ಜರಿ ಬಿಳಿ ಟೋಪಿ ಹಾಕಿದ್ದಾರೆ.
ವಜ್ರದ ಕಿರೀಟವೇ ಬೇಕಿತ್ತಾ??
ಗಣಿ ಧಣಿಗಳು ಸಕ್ರಿಯವಾಗಿರುವುದು ಕರ್ನಾತಕದಲ್ಲಿ. ಅನ್ನ, ನೀರು, ಗಾಳಿ ಜೊತೆಗೆ ಎನಿಸಲಾಗದಷ್ಟು ದುಡ್ಡು ಗಳಿಸುತ್ತಿರುವುದು ಕೂಡಾ ನಮ್ಮ ರಾಜ್ಯದಲ್ಲೇ. ಆದರೆ ಇಲ್ಲಿನ ಕಿಂಚಿತ್ ಋಣ ತೀರಿಸಲಾಗದ ಇವರಿಗೆ ವಜ್ರದ ಕಿರೀಟ ತೊಡಿಸಲು ತಿರುಪತಿ ತಿಮ್ಮಪ್ಪನೇ ಸಿಕ್ಕಿದನಾ? ಅದೇ ಹಣವನ್ನು ಇಲ್ಲಿ ಬೇರೆ ರೀತಿ ಬಳಸಲು ಇವರಿಗೇಕೆ ಮನಸ್ಸು ಬರಲಿಲ್ಲ?
ರಾಜ್ಯದಲ್ಲೇ ಅನೇಕ ದೇವಾಲಯಗಳಿವೆ. ಧರ್ಮಸ್ಥಳದಿಂದ ಅನೇಕ ಸಮಾಜ ಸೇವಾ ಕಾರ್ಯಗಳೂ ನಡೆಯುತ್ತಿವೆ. ಗ್ರಾಮೋದ್ಯೋಗ, ಸ್ತ್ರೀ ಸಬಲೀಕರಣ ಮುಂತಾದ ಯೋಜನೆಗಳನ್ನೌ ಅಲ್ಲಿನ ಧರ್ಮಾಧಿಕಾರಿಗಳು ಹಮ್ಮಿಕೊಂಡಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಹತ್ತಿರ ಹತ್ತಿರ ಲಕ್ಷ ಜನ ಬಡ ವಿದ್ಯಾರ್ಥಿಗಳು ಉಚಿತ ಊಟ ವಸತಿಯೊಂದಿಗೆ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಇಸ್ಕಾನ್ ಕೂಡಾ ಬಡ ಮಕ್ಕಳಿಗೆ ಮಧ್ಯಾಹ್ನದೂಟ ಬಡಿಸುತ್ತಿದೆ. ಭಾ.ಜ.ಪ.ದವರೇ ಆದ ಅನಂತ್ ಕುಮಾರ್ ಅವರ ಪತ್ನಿ ನಡೆಸುತ್ತಿರುವ ಸಂಸ್ಥೆಯೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಇದಲ್ಲದೇ ಸಾವಿರಾರು ಸಂಘ ಸಂಸ್ಥೆಗಳು ಬಡ ಬಗ್ಗರಿಗೆ ಸಹಾಯ ಮಾಡುತ್ತಿವೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿಯೊಂದಿಗೆ ಬಳ್ಳಾರಿಯೆಂಬ ಬಳ್ಳಾರಿಯೇ ಅಡ್ಡಡ್ಡ ಮಲಗಿದೆ. ಇವೆಲ್ಲ ಇರುವಾಗ ಇವ್ಯಾವುಗಳತ್ತಲೂ ಕಣ್ಣೆತ್ತಿಯೂ ನೋಡದ ಗಣಿ ಧಣಿಗಳು ಪರ ರಾಜ್ಯಕ್ಕೆ ೫೨ ಕೋಟಿ ರೂಪಾಯಿಗಳನ್ನು ಧಾರೆ ಎರೆದು ಬಂದಿದ್ದಾರೆ!
ಹೀಗಿದೆ ಬಳ್ಳಾರಿ
ಮೊದಲಿಗೆ ಮತದಾರರಲ್ಲಿ ಒಂದು ನಂಬಿಕೆ ಇತ್ತು. ದುಡ್ಡೇ ಇಲ್ಲದವರನ್ನು ಗೆಲ್ಲಿಸಿದರೆ ಅವರು ದುಡ್ಡು ಹೊಡೆಯತೊಡಗುತ್ತಾರೆ. ಅದರ ಬದಲಿಗೆ ವಿಪರೀತ ದುಡ್ಡಿರುವವರೇ ರಾಜಕೀಯಕ್ಕೆ ಬಂದರೆ ಅದಾಗಲೇ ಅವರ ಬಳಿ ಹಣ ಇರೋದರಿಂದ ಹಣದ ಆಸೆ ಅವರಿಗೆ ಇರೋದಿಲ್ಲ, ದೇಶವನ್ನು ಲೂಟಿ ಮಾಡೋದೊಲ್ಲ ಎಂದು ಎಲ್ಲರೂ ನಂಬಿದ್ದರು. ಆದರೆ ಅದೆಲ್ಲಾ ತಪ್ಪು ಗ್ರಹಿಕೆ ಎಂಬುದು ಈಗ ಸಾಬೀತಾಗುತ್ತಿದೆ. ಕೋಟ್ಯಾಧೀಶರುಗಳಾದರೂ ಧನಿಗಳು ಬಳ್ಳಾರಿಯನ್ನು ಉದ್ಧಾರ ಮಾಡಲಿಲ್ಲ. ಒಂದೇ ಜಿಲ್ಲೆಯಿಂದ ಮೂವರು ಮಂತ್ರಿಗಳಾಗಿದ್ದರೂ ಬಳ್ಳಾರಿಗಾದ ಲಾಭ ಮಾತ್ರ ಶೂನ್ಯ.
ಈ ಮೂವರೂ ಮನಸ್ಸು ಮಾಡಿದ್ದರೆ ಸರಕಾರದಲ್ಲಿನ ತಮ್ಮ ಪ್ರಭಾವ ಬಳಸಿಯೇ ಬಳ್ಳಾರಿಯನ್ನು ಇಷ್ಟರಲ್ಲಿಯೇ ಬೆಂಗಳೂರು ಮಾಡಿಬಿಡಬಹುದಿತ್ತು. ರಾಜ್ಯದಲ್ಲಿಯೇ ಮಾಧರಿ ಜಿಲ್ಲೆಯನ್ನಾಗಿಸುವ ಸಾಧ್ಯತೆ ಇತ್ತು. ಆದರೆ ಅಂತಹ ಪವಾಡಗಳೇನು ಇದುವರೆಗೂ ನಡೆದಿಲ್ಲ. ಇವರು ರಾಜ್ಯದ ಗುಡ್ಡ ಗುಡ್ಡಗಳನ್ನೇ ಆಂಧ್ರದ ಗಡಿ ಎಂದು ಒತ್ತುವರಿ ಮಾಡಿಕೊಂಡು ಕಬಳಿಸುತ್ತಿರುವುದನ್ನು ನೋಡಿದರೆ ಯಾವ ಪವಾಡಗಳೂ ನಡೆಯಲಾರದು ಅನ್ನುವುದು ಮನದಟ್ಟಾಗುತ್ತದೆ. ಉದಾಹರಣೆಗೆ ಬಳ್ಳಾರಿ ನಗರವನ್ನೇ ತೆಗೆದುಕೊಂಡರೂ ಸಾಕು, ಸ್ವಾತಂತ್ರ ಬಂದು ಇನ್ನೂ ನಾಲ್ಕು ವರ್ಷವೂ ಆಗಿಲ್ಲವೇನೋ ಎಂದೇ ತೋರುತ್ತದೆ. ಹೊಂಡ ಬಿದ್ದ ರಸ್ತೆಗಳು, ಗೋತಾ ಹೊಡೆದ ಚರಂಡಿ ವ್ಯವಸ್ಥೆ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಪಾದಚಾರಿ ರಸ್ತೆ ಯೆಂದರೆ ಇಲ್ಲಿನ ಜನರಿಗೆ ಇನ್ನೂ ಪರಿಚಯ ಆಗಿಲ್ಲ. ಉತ್ತಮವಾದ ವ್ಯಾಪಾರ ಮಳಿಗೆಗಳೂ ಇಲ್ಲಿಲ್ಲ. ಬಸ್ ನಿಲ್ದಾಣ ಹದಗೆಟ್ಟು ಬಹಳಾ ವರ್ಷಗಳೇ ಕಳೆದಿವೆ. ನಗರದಿಂದ ಅದನ್ನು ಹೊರ ಹಾಕಿದ್ದರೂ ಕುಂಟುತ್ತಾ ಕೆಲಸ ಸಾಗಿದೆ. ಇದನ್ನೆಲ್ಲಾ ನೋಡಿದರೆ ಬಳ್ಳಾರಿ ಎಂದಿಗೂ ಸುಧಾರಿಸುವುದಿಲ್ಲ ಅನ್ನಿಸದಿರದು.
ಅಲ್ಲಿನ ಜನತೆಯಾದರೂ ಸುಧಾರಿಸಿದರೆ ಕಡೇ ಪಕ್ಷ ರಾಜ್ಯಕ್ಕಾದರೂ ನೆಮ್ಮದಿ ಧಕ್ಕೀತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.