ವಿಷಯಕ್ಕೆ ಹೋಗಿ

ಸಿರಿಗನ್ನಡಂ ಗೆಲ್ಗೆ

ಘಟನೆ ಒಂದು
ಮೆಜೆಸ್ಟಿಕ್‌ನಿಂದ ರಾಜಾಜಿನಗರಕ್ಕೆ ಬಸ್‌ನಲ್ಲಿ ಹೊರಟಿದ್ದೆ. ನನ್ನ ಹಿಂದಿನ ಆಸನದಲ್ಲಿ ಕುಳಿತಿದ್ದ ಇಬ್ಬರು ಹುಡುಗರು (ಬಹುಶಃ ಬಿಹಾರಿಗಳು) ಹೋರ್ಡಿಂಗ್‌ನಲ್ಲಿನ ಕನ್ನಡ ಸಿನೆಮಾ ಪೋಸ್ಟರ್‌ಗಳನ್ನು ನೋಡಿ ಅವರವರೇ ಮಾತಾಡುತ್ತಾ ರಾಜ್‌ಕುಮಾರ್ ವಿಷಯಕ್ಕೆ ಬಂದರು. ಆಗ ಒಬ್ಬ ರಾಜ್ ಬಗ್ಗೆ ಕೆಟ್ಟದಾಗಿ ಏನೋ ಹೇಳಿದ. ನನಗೆ ತಡೆದುಕೊಳ್ಳಲಾಗಲಿಲ್ಲ. ಹಿಂದೆ ತಿರುಗಿ ಹಾಗೆ ಹೇಳಿದವನಿಗೆ ಒಂದು ಕೊಟ್ಟೆ. ಪಕ್ಕದವನು ಕೈ ಮುಗಿದ. ನನ್ನ ಪಕ್ಕದಲ್ಲಿದ್ದ ಹಿರಿಯರೊಬ್ಬರು ತಡೆದು ನನಗೆ ಸಮಾಧಾನ ಮಾಡಿದರು.

ಘಟನೆ ಎರಡು
ಮಹದೇವಪುರದಿಂದ ಬರುವಾಗ (ನನ್ನ ಪ್ರಯಾಣ ಬಸ್‌ನಲ್ಲೇ) ತಮಿಳಿನವನೊಬ್ಬ ನಿರ್ವಾಹಕನ ಬಳಿ ಚಿಲ್ಲರೆ ಕೊಡಲಿಲ್ಲವೆಂದು ಜಗಳ ಮಾಡಿದ. ಚಿಲ್ಲರೆ ಕೊಟ್ಟಿರುವುದಾಗಿ ನಿರ್ವಾಹಕ ಹೇಳಿದ. ಅವನು ಆ ಕಡೆ ಹೋದ ನಂತರ ಈ ಕೊಂಗ ನಿರ್ವಾಹಕನಿಗೆ ಕೆಟ್ಟದಾಗಿ ಬೈಯ್ಯುತ್ತಾ "ಈ ರಾಜ್ಯದವರೆಲ್ಲಾ ಹೀಗೇನೇ" ಅಂತ ತಮಿಳಲ್ಲಿ ಅಂದ. "___ ಮಗನೆ ಏನೆಂದೇ?" ಅನ್ನುತ್ತಾ ಅವನಿಗೂ ಹೊಡೆಯಲು ಹೋದೆ. ಅವನ ಜೊತೆಗಿದ್ದವನೊಬ್ಬ ತಡೆದು "ತಪ್ಪಾಯ್ತು" ಅಂದ. ನಾನು ಅಷ್ಟು ಗಲಾಟೆ ಮಾಡಿದರೂ ಅಕ್ಕ ಪಕ್ಕದ ಕನ್ನಡಿಗರು ಸುಮ್ಮನೇ ನೋದುತ್ತಿದ್ದರು! (ಒಬ್ಬ ಮಾತ್ರ ನನ್ನ ಪರವಾಗಿ ಬಂದರು)

ಘಟನೆ ಮೂರು
ಮಲ್ಲೇಶ್ವರದಿಂದ ಬರುತ್ತಿರುವಾಗ ನವರಂಗ್ ಬಳಿ ಇಬ್ಬರು ಹುಡುಗರು ಬಸ್ ಏರಿದರು. ಅವರು ಕನ್ನಡದಲ್ಲೇ ಮಾತಾಡುತ್ತಿದ್ದರೂ ಐಪಾಡ್‌ನಲ್ಲಿ "ಓ ಪೋಡು" ತಮಿಳ್ ಹಾಡನ್ನು ಜೋರಾಗಿ ಹಾಕಿಕೊಂಡಿದ್ದರು. "ಅದನ್ನು ಬಂದ್ ಮಾಡು, ಇಲ್ಲಾಂದರೆ ಕನ್ನಡ ಹಾಕು, ಎಲ್ಲರೂ ಕೇಳುತ್ತೇವೆ" ಎಂದು ಜೋರು ಮಾಡಿದೆ. ಅವನು ಏನೂ ಹೇಳದೇ ಬಂದ್ ಮಾಡಿದ.

ಈ ರೀತಿ ಸಣ್ಣಪುಟ್ಟ ಘಟನೆಗಳು ಬಹಳಾ ಆಗಿವೆ. ಆದ್ರೆ ಆ ಸಮಯದಲ್ಲಿ ಕನ್ನಡಿಗರ್ಯಾರೂ ನಮ್ಮ ಸಹಾಯಕ್ಕೆ ಬರೋದಿಲ್ಲ. ಎದುರಾಳಿಗಳು ಜಾಸ್ತಿ ಜನ ಇದ್ದು ತಿರುಗಿ ಬಿದ್ದರೆ ಒದೆ ತಿಂದುಕೊಂಡು ಬರಬೇಕು. (ಇದನ್ನು ನನ್ನ ಗೆಳೆಯರು ಆಗಾಗ ನನಗೆ ಹೇಳುತ್ತಲೇ ಇರುತ್ತಾರೆ) ಆದರೆ ಕನ್ನಡಮ್ಮನ ಕೃಪೆಯಿಂದ ಇದುವರೆಗೂ ಒದೆ ತಿಂದಿಲ್ಲ ಅನ್ನೋದೇ ನೆಮ್ಮದಿ.

ಸಮಾಧಾನದಿಂದ ಹೇಳಿದರೆ ಕೇಳುವಂತಹ ವ್ಯಕ್ತಿಗಳು ಅವರಲ್ಲ. ಹಾಗಿದ್ದಿದ್ದರೆ ಗಾಂಚಾಲಿ ಮಾಡದೇ ಕನ್ನಡ ಕಲಿತು ಮಾತಾಡುತ್ತಿದ್ದರು. ಇಂದು ಬೆಂಗಳೂರಿನಲ್ಲಿ ಲಕ್ಷಾಂತರ ಪರ ಭಾಷಿಕರಿದ್ದಾರೆ. ಅವರಲ್ಲಿ ಸುಮಾರು ಶೇ ೯೦ ರಷ್ಟು ಮಂದಿ ಕನ್ನಡದಲ್ಲೇ ಮತಾಡುತ್ತಾರೆ. ಆದ್ರೆ ಗಾಂಚಾಲಿ ಇರುವ ಶೇ ೧೦ ರಷ್ಟು ಜನ ಮಾತ್ರ ಅವರ ಭಾಷೆಯಲ್ಲೇ ವ್ಯವಹರಿಸುತ್ತಾರೆ. ನಾವು ಕೊಂಗರು ಅಂತ ತಮಿಳರನ್ನು ಬೈಯ್ಯುತ್ತೇವೆ. ಆದ್ರೆ ನಮ್ಮ ಮನೆ ಪಕ್ಕದಲ್ಲಿ ಇರುವ ಒಂದು ತಮಿಳು ಕುಟುಂಬದಲ್ಲಿ ಅವರು ಗಂಡ ಹೆಂಡತಿ ತಮಿಳಲ್ಲಿ ಮಾತಾಡಿಕೊಂಡರೂ ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತಾಡುತ್ತಾರೆ. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಪ್ರಯತ್ನ ಅದು. ಇಂತಹ ತಮಿಳರನ್ನು, ತೆಲುಗರನ್ನು ನೋಡಿದ್ದೇನೆ. ಆದರೆ ಒಂದೇ ಒಂದು ಹಿಂದಿ ಕುಟುಂಬ ನಮಗೆ ಈ ರೀತಿ ಸಿಗುವುದಿಲ್ಲ. ತಮ್ಮದು ದೈವ ಭಾಷೆ ಅನ್ನುವ ಅಹಂಕಾರ ಹಿಂದಿಯವರದ್ದು.
ಶೇ.೧೦ ರಷ್ಟು ಪರ ಭಾಷಿಕರಿಗೆ ಗಾಂಚಾಲಿ ಆದ್ರೆ ಶೇ. ೯೦ ರಷ್ಟು ಕನ್ನಡಿಗರು ಅಭಿಮಾನ ಶೂನ್ಯರು. ಮಕ್ಕಳ ಉಜ್ವಲ ಭವಿಶ್ಯಕ್ಕೆಂದು ಆಂಗ್ಲ ಮಾಧ್ಯಮಕ್ಕೆ ಹಾಕುತ್ತಾರೆ. ಹಾಕಲಿ, ಆದರೆ ಅಷ್ಟೇ ಪ್ರೀತಿಯನ್ನು ಕನ್ನಡದ ಮೇಲೆಯೂ ಇರಿಸಿ ಕನ್ನಡವನ್ನೂ ತಮ್ಮ ಮಕ್ಕಳಿಗೆ ಸರಿಯಾಗಿ ಕಲಿಸುವ ವ್ಯವಸ್ಥೆ ಮಾಡುವುದಿಲ್ಲ. ಕನ್ನಡದ ಇಂದಿನ ಬಹುತೇಕ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು ಬಾರದು. ಹಾಗಾದರೆ ನಿಜವಾದ ಗಾಂಚಾಲಿ ಇರುವುದು ಯಾರಿಗೆ?

ಮೈಸೂರಿನ್ ಖ್ಯಾತ ವಿದ್ಯಾ ಸಂಸ್ಥೆ "ಜೆ.ಎಸ್.ಎಸ್."ನಿಂದ ಬಂದ ಸುದ್ದಿ... ಆ ಸಂಸ್ಥೆಯ ನರ್ಸಿಂಗ್ ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಬರೇ (ಶೇ ೯೫%) ಮಲಯಾಳಿ ಹುಡುಗಿಯರೇ ಇರುವುದು. ಇವರಲ್ಲಿ ಶೇ ೯೦% ಕ್ರಿಶ್ಚಿಯನ್ ಸಮುದಾಯದವರಂತೆ. ಹಾಗಾಗಿ ನರ್ಸಿಂಗ್ ಹಾಸ್ಟೆಲ್‌ನಲ್ಲಿ ಪ್ರತಿ ದಿನ ಏಸುವಿನ ಭಜನೆ (ಪ್ರಾರ್ಥನೆ) ಇದ್ದೇ ಇರುತ್ತದಂತೆ. ಈ ನಡುವೆ (ಒಂದು ತಿಂಗಳ ಕೆಳಗೆ) ರಶ್ಮಿ ಎನ್ನುವ ಕನ್ನಡ ವಿದ್ಯಾರ್ಥಿನಿಯೊಬ್ಬಳು ಪ್ರಿನ್ಸಿಪಾಲ್‌ರೊಂದಿಗೆ "ನಾನು ಏಸು ಪ್ರಾರ್ಥನೆ ಮಾದುವುದಿಲ್ಲ. ಹಾಗೆ ಮಾಡುವುದಿದ್ದರೆ ಅವರೂ ನಮ್ಮ ವಿನಾಯಕನ ಪ್ರಾರ್ಥನೆ ಮಾಡಲಿ" ಎಂದು ಗಲಾಟೆ ಮಾಡಿ ಗೆದ್ದಿದ್ದಾಳೆ. ಈಗ ಎರಡೂ ರೀತಿಯ ಪ್ರರ್ಥನೆಗಳು ನಡೆಯುತ್ತಿವೆ ಅಲ್ಲಿ.

ಕಾಮೆಂಟ್‌ಗಳು

.....ಆಗ ಸಂಜೇ ಆಗಿತ್ತ...... ಹೇಳಿದ್ದಾರೆ…
ಅಬ್ಬಾ!! ಸಕ್ಕತ್ ನೀವು.. ಆದ್ರೆ ಯಾಕೋ ತುಂಬಾ ಕನ್ನಡಿಗರೇ ಕನ್ನಡ ಬಿಟ್ಟು ಬೇರೆ ಎಲ್ಲಾ ಮಾತಾಡಿ ಆಡಿ ಇವತ್ತು ಈ ಗತಿ ಬಂದಿದೆ
Lohith ಹೇಳಿದ್ದಾರೆ…
Ee tara saniveshagalanna nanu tumba yedirisuddine....kelavomme nanna akka pakka davaru full support madidare....kelavammo akka pakka davaru navu vishalal hrudayadavaru anta ogdidunna orskond sumn agtare...

Jagruthiya korathe yeddu kantha ide aste.....

Munde ondu dina nam kanasu nanasu agodu gurantee adre alli vargu talmeya itkond horata madona
Mahantesh ಹೇಳಿದ್ದಾರೆ…
re neev sakath. ... aadre you have to be careful

hats off to you

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...