ವಿಷಯಕ್ಕೆ ಹೋಗಿ

ಮೈ ಲಾರ್ಡ್ ನನ್ನ ವಾದ....

"ದೇಶವನ್ನು ಒಡೆಯಲು ಯತ್ನಿಸಬೇಡಿ" - ಇದು ಮೊನ್ನೆ ನೀವು ಹೇಳಿದ ಮಾತು. ಒಂದು ಪ್ರತಿಮೆಯ ಅನಾವರಣವನ್ನು ತಡೆಯುವುದರಿಂದ ದೇಶ ಒಡೆಯುತ್ತದೆಯೇ? ಇಷ್ಟಕ್ಕೂ ದೇಶ ಒಡೆಯದಿರಲೆಂದು ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆಯೇ? ಇವೆರಡೂ ಅಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಷಯ. ಮೊದಲಿಗೆ ಎರಡು ರಾಜ್ಯಗಳ ಸೌಹಾರ್ಧತೆಗಾಗಿ ತಿರುವಳ್ಳುವರ್ ಪ್ರತಿಮೆ ಬೆಂಗಳೂರಿಗೆ ಬರಲಿಲ್ಲ ಅನ್ನುವುದನ್ನು ತಿಳಿಯಪಡಿಸುತ್ತೇನೆ ಯುವರ್ ಆನರ್. ಅದನ್ನು ತಮಿಳರು ಮೊದಲು ಇಲ್ಲಿ ಸ್ಥಾಪಿಸಲು ಹೊಂಚು ಹಾಕಿದರು. ಅದಾದ ಎಷ್ಟೋ ವರ್ಷಗಳ ನಂತರ ತಿರುವಳ್ಳುವರ್ ಪ್ರತಿಮೆಗೆ ಪ್ರತಿಯಾಗಿ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಬೇಕು ಅನ್ನುವ ಹೊಸ ವಾದ ಹುಟ್ಟಿಕೊಂಡಿತು ಅಷ್ಟೇ.
ನಾವು ಯಾರನ್ನು ಬೇಕಾದರೂ ನಿಯಂತ್ರಿಸಬಹುದು ಅನ್ನುವುದು ಮೊದಲಿಗೆ ರಾಜಕಾರಣಿಗಳಿಗೆ, ನಂತರ ಪೊಲೀಸರಿಗೆ, ತದ ನಂತರ ಪತ್ರಕರ್ತರಿಗೆ ಹಾಗೂ ಇದೀಗ ನಿಮಗೆ ಅಂಟಿದ ಜಾಡ್ಯ. "ಯಾರೂ ಪ್ರತಿಮೆ ಅನಾವರಣವನ್ನು ತಡೆಯಬಾರದು, ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಬಾರದು" ಅನ್ನುವ ಮೂಲಕ ಪ್ರಜಾಪ್ರಭುತ್ವದಲ್ಲಿ ನಾವು ಬದುಕುತ್ತಿದ್ದೇವೆ ಅನ್ನುವ ಅಂಶವನ್ನೇ ನೀವು ಅಳಿಸಿ ಹಾಕಿದಿರಿ. ನಿಜವಾಗಿಯೂ ನ್ಯಾಯದಾನ ನೀಡುವುದಾಗಿದ್ದರೆ "ಚೆನ್ನೈನಲ್ಲಿಯೂ ಸರ್ವಜ್ಞನ ಪ್ರತಿಮೆಯನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸುವಂತೆ ಸೂಚಿಸಬುದಾಗಿತ್ತು. ಒಂದೇ ದಿನ ಎರಡೂ ಕಡೆ ಅನಾವರಣ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬಹುದಾಗಿತ್ತು. ಆದರೆ ಅದನ್ನು ನೀವು ಮಾಡಲಿಲ್ಲ.
ಕೆಲವು ವರ್ಷದ ಹಿಂದೆ ಕೋಲಾರದಲ್ಲಿ ತಮಿಳು ಶಾಸಕನೊಬ್ಬ ಎಂಜಿಆರ್ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿದ್ದ. ಅದನ್ನು ಕನ್ನಡ ಮುಖಂಡರು ತಡೆದರು. ಬಹುಶಃ ಅದರ ದೂರು ನಿಮ್ಮ ಬಳಿ ಬಂದಿದ್ದರೆ ನೀವು ಹೇಳಿರುತ್ತಿದ್ದಿರಿ.. "ದೇಶ ಒಡೆಯಬೇಡಿ, ಎಂಜಿಆರ್ ಪ್ರತಿಮೆ ಸ್ಥಾಪಿಸಲು ಬಿಡಿ" ಎಂದು! ಏಕೆಂದರೆ ತಮಿಳರ ಪಾಲಿಗೆ ಎಂಜಿಆರ್ ಸಹ ಮಹಾನ್ ವ್ಯಕ್ತಿಯೇ.
ಇದೇ ತಮಿಳನೊಬ್ಬ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಬಾರದು ಎಂದು ನಿಮ್ಮ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ಖಂಡಿತಾ ನಿಮ್ಮ ನ್ಯಾಯಾಲಯ ಅವನಿಗೆ "ದೇಶ ಒಡೆಯಲು ಯತ್ನಿಸಬೇಡಿ" ಎಂದು ಎಚ್ಚರಿಕೆ ನೀಡಲೇ ಇಲ್ಲ. ಕಾವೇರಿ ನೀರಿಗಾಗಿ ಜಯಲಲಿತ ಸುಪ್ರೀಂ ಕೋರ್ಟ್‌‍ಗೆ ಹೋದಾಗ ಆಕೆಗೂ ಕೂಡಾ "ದೇಶ ಒಡೆಯಲು ಯತ್ನಿಸಬೇಡಿ" ಎಂದು ಹೇಳಲಿಲ್ಲ. ಏಕೆಂದರೆ ದೇಶ ಒಡೆಯಲು ಕನ್ನಡಿಗರಲ್ಲದೇ ಇನ್ಯಾರು ಯತ್ನಿಸಲು ಸಾಧ್ಯ ಅನ್ನುವುದು ನಿಮ್ಮ ಅಭಿಪ್ರಾಯ.
ಅವರು ನೀರು ಬಿಡಿ ಅಂದಾಗೆಲ್ಲಾ ನಾವು ಬಿಡಬೇಕು. ಇಲ್ಲಾಂದರೆ ನಿಮ್ಮ ಪ್ರಕಾರ ದೇಶ ಒಡೆದು ಚೂರಾಗಿ ಹೋಗುತ್ತದೆ. ಅವರು ಹೇಳಿದ ಜಾಗದಲ್ಲಿ, ಅವರು ಹೇಳಿದ ಪ್ರತಿಮೆಯನ್ನು ಸ್ಥಾಪಿಸಬೇಕು. ಇಲ್ಲಾಂದರೆ ದೇಶ ನಮ್ಮಿಂದ ಒಡೆದು ಹೋಗುತ್ತದೆ. ಇದೆಲ್ಲಿಯ ನ್ಯಾಯ ಸ್ವಾಮಿ?
ತಿರುವಳ್ಳುವರ್ ದೊಡ್ಡ ಕವಿ ಇರಬಹುದು. ಆದರೆ ಅದೇ ತಮಿಳು ಸರ್ಕಾರ ಕವಿಯ ನುಡಿಗಳನ್ನು ಕನ್ನಡದಲ್ಲಿ ಮುದ್ರಿಸಿ ಕಡಿಮೆ ಬೆಲೆಗೆ ನಮಗೆಲ್ಲಾ ನೀಡಿದ್ದಿದ್ದರೆ ನಮಗೂ ಆ ಕವಿಯ ದೊಡ್ಡ ಜ್ಞಾನ ತಿಳಿದಿರುತ್ತಿತ್ತು. ತಮಿಳರು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಪುಸ್ತಕ ಮುದ್ರಿಸುತ್ತಾರೆ. ಆದರೆ ಅವರ ಸಾಹಿತ್ಯದ ಬಗ್ಗೆ ಕನ್ನಡದಲ್ಲಿ ಮುದ್ರಿಸುವ ಪ್ರಯತ್ನ ಮಾಡುವುದಿಲ್ಲ.
ಅದೆಲ್ಲಾ ಇರಲಿ, ಈಗ ನಿಮ್ಮ ಬಗ್ಗೆಯೇ ಒಂದೆರಡು ಪ್ರಶ್ನೆ.
ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಂತಮ್ಮ ಆಸ್ತಿ ವಿವರವನ್ನು ಭಹಿರಂಗಪಡಿಸುತ್ತಾರೆ. ಆದರೆ ನಿವ್ಯಾಕೆ ಅದನ್ನು ಮಾಡಲು ಹಿಂಜರಿಯುತ್ತೀರಿ ಸ್ವಾಮಿ? ಒಂದು ವಿಧದಲ್ಲಿ ನೀವೂ ಕೂಡಾ ಸರಕಾರಿ ನೌಕರರೇ ಹೊರತೂ ಬೇರೇನಲ್ಲ. ಹಾಗಿದ್ದರೆ ನಿಮಗೇಕೆ ವಿಷೇಶ ಸೂತ್ರ? ಸರ್ಕಾರದಿಂದ ಪಡೆವ ಸಂಬಳದ ಲೆಕ್ಕವನ್ನು ಸರಕಾರಕ್ಕೆ ನೀಡಲು ನಿಮಗೇಕೆ ಹಿಂಜರಿಕೆ? ಉಳಿದವರೆಲ್ಲಾ ಸಾಧಾರಣ ಪ್ರಜೆಗಳು, ನೀವು ಮಾತ್ರ ಎಲ್ಲರಿಗಿಂತಲೂ ಮಿಗಿಲು ಅನ್ನುವ ಭ್ರಮೆಯೇ?
ದಟ್ಸಾಲ್ ಯುವರ್ ಆನರ್...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...